Wednesday, October 3, 2012

ಭ್ರಮೆ!


ಭ್ರಮೆ ಹರಿಯಿತು!
ಮನ ಮಸುಕಾಯಿತು
ಓದಿದ್ದೆಷ್ಟೋ, ಬರೆದಿದ್ದೆಷ್ಟೋ
ಗುಲಾಮನಾದರೂ
ದೊರೆಯಲಿಲ್ಲ ಮುಕುತಿ
ಅನುಭವ ದಕ್ಕಲಿಲ್ಲ

ಸಂಬಂಧ ತೆಳುವಾಯಿತು
ಮಾತು ಬಡವಾಯಿತು
ಹಣ್ಣೆಲೆ ಮಾಗಲಿಲ್ಲ
ಚಿಗುರು ಬೆಳೆಯಲಿಲ್ಲ
ಓದಿಗೂ, ಪ್ರಬುದ್ಧತೆಗೂ
ಬಂಧ ಮೂಡಲಿಲ್ಲ

ಆಗಸ ಬಿಸಿಯಾಯಿತು
ನಳನಳಿಸುತ್ತಿದ್ದ
ಕಾಯಿ ಬಾಡಿತು
ತಂಪಾದ ಇಳೆ
ಬೀಸಿದ ಬಿರುಗಾಳಿಗೆ
ಕಾದು ಕೆಂಪಾಯಿತು

ಕತ್ತಲೆ ಕವಿಯಿತು
ಅರಮನೆಯಲ್ಲೀಗ
ಮೌನ ಮೆರವಣಿಗೆ
ಸೃಷ್ಟಿಸಿದವರಾರು?
ಅಳಿಸಿದವರಾರು?
ಅರಿವು ಮೂಡಲಿಲ್ಲ

No comments:

Post a Comment