Wednesday, August 6, 2014

ಅಂಬರೀಷ್ ಅವರು ವಿಕ್ರಮ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ಬರೆದದ್ದು.

ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ, ಆ ರೋಗಿಯ ಅಟೆಂಡರ್ ಗಳನ್ನು, ನೋಡಲು ಬರುವವರನ್ನು ಮ್ಯಾನೇಜ್ ಮಾಡುವುದು ಭಯಂಕರ ಕಷ್ಟ! ಅದರಲ್ಲೂ ಆ ರೋಗಿ ಸೆಲೆಬ್ರಿಟಿಯಾಗಿದ್ದರೆ, ಆಸ್ಪತ್ರೆಯ ಸಿಬ್ಬಂಧಿಗಳ ಕಥೆ ಮುಗಿಯಿತು. ವೈದ್ಯರು ಅವರ ಪಾಡಿಗೆ ಅವರ ಕೆಲಸ ಮಾಡಲು ಬಿಡದೇ ನೂರೆಂಟು ಪ್ರಶ್ನೆಗಳನ್ನು ಕೇಳಿ ತಲೆ ತಿಂದು ಬಿಡುತ್ತಾರೆ. ಬಂದವರೆಲ್ಲರಿಗೂ ಸಮಜಾಯಿಷಿ ನೀಡುವುದೇ ವೈದ್ಯರ ಹಾಗೂ ಸಿಬ್ಬಂಧಿಗಳ ಕೆಲಸವಾಗಿಬಿಡುತ್ತದೆ. ನೂರು ರೋಗಿಗಳನ್ನು ಮ್ಯಾನೇಜ್ ಮಾಡಬಹುದು ಆದರೆ ೧೦ ರೋಗಿಗಳ ೧೦೦ ಅಟೆಂಡರ್ ಗಳನ್ನಲ್ಲ! ಇನ್ನೂ ನೋಡಲು ಬರುವವರ ಕಾಟ ಬೇರೆ. ಹೋಗಿ ನೋಡದಿದ್ದರೆ ಏನಂದುಕೊಳ್ಳುತ್ತಾರೋ? ಎಂದಂದುಕೊಂಡು ಬರುವವರೇ ಹೆಚ್ಚು ಜನ. ಇವರಿಂದಾಗಿ ರೋಗಿಗಳಿಗೂ ರೆಸ್ಟ್ ಇಲ್ಲ, ಅಟೆಂಡರ್ ಗಳಿಗೂ ನೆಮ್ಮದಿಯಿಲ್ಲ! ಎನಾಯಿತೂ? ಎಂಬುದನ್ನು ವಿವರಿಸಿ, ವಿವರಿಸಿ, ಅಟೆಂಡರ್ ಗಳಿಗೂ ಪಕ್ಕದ ಬೆಡ್ ರೆಡಿ ಮಾಡಬೇಕಾಗುತ್ತದೆ! 

(ನಟ ಅಂಬರೀಷ್ ಹಾಗೂ ವಿಕ್ರಮ್ ಆಸ್ಪತ್ರೆಯ ಪರವಾಗಿ) — feeling sick.

No comments:

Post a Comment