Wednesday, August 6, 2014

ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಬಂದಿದ್ದ ಸಂದರ್ಶನ


ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ವಿವೇಕ್ ಶಾನ್ಭಾಗ್ ಮತ್ತು ಜಯಂತ್ ಕಾಯ್ಕಿಣಿಯವರು ಚಂದ್ರಶೇಖರ ಕಂಬಾರ್, ಕಾರ್ನಾಡ್, ದೇವನೂರು ಮತ್ತು ಅನಂತ ಮೂರ್ತಿಯವರ ಸಂವಾದ ನಡೆಸಿದ್ದರು. ಇತ್ತೀಚಿನ ದಿನಗಳಲ್ಲಿ ನಡೆದ ಅಪರೂಪದ ಹಾಗೂ ಪ್ರಾಮಾಣಿಕತೆಯ ಸಂವಾದವೆಂದೇ ಹೇಳಬಹುದು. ಈ ಸಂವಾದದಲ್ಲಿ ಪರಸ್ಪರರ ನಡುವೆ ಇರುವ ನೆನಪುಗಳಿಂದ ಹಿಡಿದು ಸಂಸ್ಕೃತಿ, ಸಾಹಿತ್ಯ, ರಾಜಕೀಯ,ಜಾತಿ, ಭಾಷೆ, ಶಿಕ್ಷಣ ಈ ಎಲ್ಲವುಗಳ ಬಗ್ಗೆಯೂ ಒಳ್ಳೆಯ ಚರ್ಚೆ ನಡೆದಿದೆ. (ನನಗೆ ಅತ್ಯಂತ ಖುಷಿ ಕೊಟ್ಟ, ಕಳೆದುಹೋಗುತ್ತಿರುವ ಸಾಹಿತಿಗಳ ಮೇಲಿನ ಗೌರವವನ್ನು ಮರಳಿಸಿದ ಯಶಸ್ಸು ಈ ಸಂವಾದದ್ದು!) ಈ ಸಂವಾದದಲ್ಲಿ ದೇವನೂರು ಅವರು ಒಂದು ಮಾತು ಹೇಳಿದ್ದಾರೆ ‘ಇಂಡಿಯಾದಂಥ ದೇಶಗಳಲ್ಲಿ ಒಬ್ಬ ಲೇಖಕನನ್ನು ಕತೆ-ಗಿತೆ ಬರೆಯುವವನು ಎಂದು ಪರಿಗಣಿಸುವುದಿಲ್ಲ. ಅವನೊಬ್ಬ ಪ್ರವಾದಿ ಅಂತಲೋ, ಆಲ್ ರೌಂಡರ್ ಅಂತಲೋ ಅಂದುಕೊಂಡುಬಿಡ್ತಾರೆ!’ 

ಕಾರ್ನಾಡ್ ಹೇಳಿರುವುದು - ಕನ್ನಡ ಸಾಹಿತ್ಯಕ್ಕೆ ದೊಡ್ಡ ಡ್ಯಾಮೇಜ್ ಆಗಿರುವುದು ಜ್ಞಾನಪೀಠ ಅವಾರ್ಡ್ನಿಂದ! ಇವರನ್ನು ದೇವಾಂಶ ಸಂಭೂತರು ಅನ್ನುವಂಥ ಟ್ರೀಟ್ ಮೆಂಟ್ ಶುರುವಾಗಿಬಿಟ್ಟಿದೆ. ಯಶವಂತ ಚಿತ್ತಾಲರಂಥ ಲೇಖಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’. ಗ್ರಂಥಾಲಯಕ್ಕೆ ಸಂಬಂಧಿಸಿದವರೊಬ್ಬರು ಜ್ಞಾನಪೀಠ ಪ್ರಶಸ್ತಿ ಪಡೆದ ನನಗೆ ಮತ್ತು ಅನಂತಮೂರ್ತಿ ಅವರಿಗೆ ಎರಡು ಟ್ರೋಫಿ ಅಂತಾ ಘೋಷಿಸಿಬಿಟ್ಟರು. ಜ್ಞಾನ ಪೀಠ ಪ್ರಶಸ್ತಿ ಪಡೆದಿದ್ದಕ್ಕೆ ನನಗ್ಯಾಕೆ ಟ್ರೋಫಿ? ನಾನು ತೊಗೊಳ್ಳೋದಿಲ್ಲ ಅಂದೆ. ಕಡೆಗೆ ಅನಂತಮೂರ್ತಿ ಅವರ ಬಳಿಗೆ ಹೋಗಿ ನೀವಾದರೂ ತೊಗೊಳ್ಳಿ ಅಂದರು. ಆಮೇಲೆ ಅವರಿಗೆ ಸನ್ಮಾನ ಆಯಿತು. ಆಮೇಲೆ ಗೊತ್ತಾಯಿತು. ಸನ್ಮಾನ ಮಾಡುತ್ತಿದ್ದ ವ್ಯಕ್ತಿ ನಿವೃತ್ತರಾಗುತ್ತಿದ್ದಾರೆ. ಅವರು ಪೇಪರ್ ನಲ್ಲಿ ಬರುವ ಕಾರಣಕ್ಕೆ ನಮ್ಮನ್ನು ಸನ್ಮಾನಿಸುತ್ತಿದ್ದಾರೆ ಅಂತಾ!

ಇದಕ್ಕೆ ಉತ್ತರವಾಗಿ ಅನಂತ ಮೂರ್ತಿ ಅವರು - ಬೇರೆ ದೇಶಗಳಲ್ಲಿ ಲೇಖಕರಿಗೂ ಸಾಮಾನ್ಯರಿಗೂ ಇಲ್ಲಿರುವಂಥ ಸಂಬಂಧಗಳಿಲ್ಲ. ಎಲ್ಲಾ ಪ್ರಶಸ್ತಿಗಳು ಬಂದಾಗಲೂ ಒಂದು ರೀತಿಯ ಉತ್ಸವದ ಸಂಭ್ರಮಗಳು ಇಂಡಿಯಾದಲ್ಲಿ ಇವೆ. ಇದನ್ನು ನಿರಾಕರಿಸುವುದು ಅಷ್ಟು ಸರಿಯಲ್ಲ ಅಂತ ನನಗೆ ಅನ್ನಿಸುತ್ತದೆ. ಅದನ್ನು ತಲೆಗೆ ಹಚ್ಚಿಕೊಳ್ಳಲು ಬಾರದು, ಹಾಗಂತ ನಿರಾಕರಿಸಲೂ ಬಾರದು. ಸಾಹಿತ್ಯ ಸಮ್ಮೇಳನ ಅನ್ನುವ ಉತ್ಸವ ಮಾಡ್ತಾರೆ. ಸಾವಿರಾರು ಜನ ಸೇರ್ತಾರೆ. ಕನ್ನಡದಂಥ ಒಂದು ಭಾಷೆ ಜಗತ್ತಿನ ಭಾಷೆಯೂ ಅಲ್ಲ. ಅಂಥ ಹೊತ್ತಿನಲ್ಲಿ ಈ ರೀತಿಯ ಪ್ರೋತ್ಸಾಹ ಕನ್ನಡಕ್ಕೆ ಬರುವುದನ್ನು ಲೇಖಕರು ತಿರಸ್ಕರಿಸಬಾರದು ಅಥವಾ ಅದನ್ನು ತಲೆಗೆ ಹಚ್ಚಿಕೊಂಡು ನಾನು ಬಹಳ ದೊಡ್ಡ ಲೇಖಕ ಆಗ್ತೀನಿ ಅಂತಾ ತಿಳಿಯೋದು ಅಲ್ಲ.

No comments:

Post a Comment