Wednesday, August 6, 2014

ಹೆಣ್ಣು ಅಬಲೆ! :(


http://bhoothagannadi.blogspot.in/2014/08/blog-post_4.html?m=1 ಈ ಲೇಖನ ಓದಿದಾಗ ಬೇಡಬೇಡವೆಂದರೂ ನಾನು ೧೦ ನೇ ತರಗತಿಯಲ್ಲಿದ್ದಾಗ ನಡೆದ ಕಾವೇರಿ ಗಲಾಟೆ ನೆನಪಾಯಿತು. 

ನಾವು ಆಗ ರಾಜಾಜಿನಗರದಲ್ಲಿದ್ದೆವು. ಪಕ್ಕದ ರಸ್ತೆ ಪ್ರಕಾಶ ನಗರ. ಇತ್ತ ಕಡೆ ಕನ್ನಡಿಗರು, ಅತ್ತ ಕಡೆ ತಮಿಳರು ಹೆಚ್ಚು. ಅಲ್ಲೆಲ್ಲೋ ನಡೆಯುತ್ತಿದ್ದ ಕಾವೇರಿ ಗಲಭೆಯ ಗಾಳಿ ಇಲ್ಲಿಗೂ ಬೀಸಿತು. ಅದುವರೆವಿಗೂ ಒಟ್ಟಿಗೆ ಟೀ ಕುಡಿಯುತ್ತಿದ್ದ, ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುತ್ತಿದ್ದ ಗೆಳೆಯರ ನಡುವೆ ಎರಡು ಬಣಗಳಾದವು. ಕರ್ನಾಟಕ ತಮಿಳುನಾಡು ಬಾರ್ಡರ್ ನಮ್ಮ ಮನೆಯ ಪಕ್ಕದಲ್ಲೇ ರಚಿತವಾಯಿತು. ಎರಡು ಕಡೆಯವರೂ ಆತ್ಮೀಯ ಸ್ನೇಹಿತರೇ. ಆದರೂ ಸೀಮೆಎಣ್ಣೆ ಬಾಟಲುಗಳಿಂದ ಹಿಡಿದು ಚಾಕು, ಚೂರಿ, ಮಚ್ವು, ಲಾಂಗ್ ಎಲ್ಲವೂ ಹೊರ ಬಂದವು. ಎರಡೂ ಕಡೆಯವರು ಬೈದಾಡುತ್ತಿದ್ದರು. ಬಾಟಲುಗಳನ್ನು ಎಸೆಯುತ್ತಿದ್ದರು. ಎರಡೂ ಕಡೆಯವರೂ ಬೈದಾಡುತ್ತಿದ್ದರು. ನಮ್ಮ ಬೈಗುಳಗಳೆಲ್ಲವೂ ಅಮ್ಮ ಮತ್ತು ಅಕ್ಕಂದಿರಿಗೆ ಅಲ್ಲವೇ?  ಪೋಲೀಸರು ಬಂದು ಅಶ್ರುವಾಯು ಸಿಡಿಸಿದರು. ನಮ್ಮ ಮನೆಯೇ ಕಾರ್ನರ್ ಆದ್ದರಿಂದ ಜೊತೆಗೆ ಅಣ್ಣನ ಸ್ನೇಹಿತರು ಒಂದಷ್ಟು ಜನರಿದ್ದರಿಂದ ನಮ್ಮ ಮನೆಯ ಈರುಳ್ಳಿಯೆಲ್ಲವೂ ಖಾಲಿ. ಕರ್ಫ್ಯೂ ಹಾಕಿದರು. ಈ ಗಲಾಟೆಯ ಸಂದರ್ಭವನ್ನು ಉಪಯೋಗಿಸಿಕೊಂಡು, ನಮ್ಮ ಮನೆಯ ಎದುರು ಬಹುಕಾಲದಿಂದ ಎಬ್ಬಿಸಲಾಗದೇ ವಾಸವಾಗಿದ್ದ ಸ್ಲಮ್ / ಮನೆ (ನೆನಪಿಲ್ಲ) ಒಂದಕ್ಕೆ ಬೆಂಕಿ ಹಚ್ಚಲಾಯಿತು. ಪಾಪ! ಆಮೇಲೆ ಆ ಜನರು ಎಲ್ಲಿ ಹೋದರೋ ತಿಳಿಯಲಿಲ್ಲ. 

ಗಲಭೆಗೆ ಸೇರಿದ್ದ ಜನರು ದೂರವಾಗುವಾಗ ಹೇಳಿ ಹೋದದ್ದು ಮಾತ್ರ "ನಿಮ್ಮ ರಸ್ತೆಯಲ್ಲಿ ಓಡಾಡುವ ಯಾವ ಹೆಣ್ಣುಮಕ್ಕಳು ಕೂಡ ಸುರಕ್ಷಿತವಾಗಿ ಮನೆ ಸೇರಲಾರರು!  

ಒಂದಷ್ಟು ದಿವಸಗಳು ನಾನು ಟೈಪಿಂಗ ಕ್ಲಾಸಿಗೆ ಹೋಗುವಾಗ ನನ್ನೊಟ್ಟಿಗೆ ಯಾರಾದರೂ ಬರುತ್ತಿದ್ದರು. ಹೀಗೆ ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ! ಯಾವಾಗಲೂ ಅಂದು, ಇಂದು 

No comments:

Post a Comment