Tuesday, December 30, 2014

ಎಲ್ಲಾ ವಿಷಯಗಳಿಗೂ ನಮ್ಮದು Over reaction!


ಎಲ್ಲಾ ವಿಷಯಗಳಿಗೂ ನಮ್ಮದು Over reaction! :( ಮೊನ್ನೆ BM ನಲ್ಲಿ "Racism against NE youth again!" ಅಂತಿತ್ತು. ಪೂರ್ತಿ ಓದಿ ನೋಡಿದಾಗ, ಬೈಕ್ ನ ಪೆಟ್ರೋಲ್ ಕಳ್ಳತನಕ್ಕೆ ಬಂದವರು, ಮನೆಯವರ ಮತ್ತು ಆ ಕಳ್ಳರ ನಡುವೆ ಜಗಳವಾಗಿ, ಮನೆಯಲ್ಲಿದ್ದವರು ಹೊರ ರಾಜ್ಯದವರೆಂದು ತಿಳಿದು ನಂತರ ಅಟ್ಯಾಕ್ ಮಾಡಿದ್ದಾರೆ. ಇಲ್ಲಿ ನಡೆದ ಘಟನೆಯ ಮೂಲ ಉದ್ಧೇಶ ಹೊರ ರಾಜ್ಯದವರ ಮೇಲಿನ ಅಟಾಕ್ ಆಗಿರಲಿಲ್ಲವಲ್ಲ! ಆದರೂ ಮಾಧ್ಯಮಗಳು ಹೀಗೆ! 

ಕರ್ನಾಟಕದಲ್ಲಿರುವ ಶಾಲೆಗಳನೆಲ್ಲಾ ಲೆಕ್ಕಕ್ಕೆ ತೆಗೆದುಕೊಂಡರೆ, ಈಗ ಈ ರೇಪ್ ಅಥವಾ ಲೈಂಗಿಕ ದೌರ್ಜನ್ಯಗಳು ಶಾಲೆಯಲ್ಲಿ ನಡೆಯುವಂತದ್ದು ಬಹಳ ಕಡಿಮೆ. ಇದು ಆಗಲೂ ಇತ್ತು. ಈಗಲೂ ಇದೆ. ಹೌದು. ಮಕ್ಕಳ ಮೇಲಿನ ದೌರ್ಜನ್ಯ ಅಕ್ಷಮ್ಯ ಅಪರಾಧವೇ. ಆದರೆ ಮೇಲಿಂದ ಮೇಲೆ ನಾವು ಇಂತಹ ದೌರ್ಜನ್ಯಗಳನ್ನು ಪ್ರಕಟಿಸಿ, ಮಕ್ಕಳ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿಲ್ಲವೇ? ಬೇಕಾಗಿರುವ, ಬೇಡದಿರುವ ಎಲ್ಲಾ ರೂಲ್ಸ್ ಗಳನ್ನು ಶಾಲೆಗಳ ಮೇಲೆ ಹಾಕಿ, ಒಂದಷ್ಟು ಲಂಚ ಕಿತ್ತು, ಪರ್ಮಿಷನ್ ಕೊಟ್ಟರೆ, ಶಾಲೆಗಳ ಫೀಸ್ ಹೆಚ್ವಾಗಿಯೇ ಆಗುತ್ತದೆ. ಬಡವರ ಮಕ್ಕಳು ಓದುವುದು ಬೇಡವೇ? 

ನಂದಿತಾ ಪ್ರಕರಣ - ಯಾವುದೇ ಸಣ್ಣ ಆಸ್ಪತ್ರೆಗಳವರಿಗೂ ಅರ್ಥವಾಗುವ ವಿಷಯವಾಗಿತ್ತು. ಬೆಳಿಗ್ಗೆ ಆ ಹುಡುಗರು ಆಕೆಗೆ ಪಾಯಿಸನ್ / ಫೆನಾಯಿಲ್ ಕುಡಿಸಿ, ಆಕೆಗೆ ಏನೂ ಆಗದೆ, ಸಂಜೆ ತಂಗಿಯೊಟ್ಟಿಗೆ ಆಟವಾಡಿ, ನಂತರ ಮಲಗಿದವಳಿಗೆ ರಿಯಾಕ್ಷನ್ ಆದದ್ದು ಹೇಗೆ? ಏಕೆ? ಯಾವುದೇ ಆಸ್ಪತ್ರೆಯಲ್ಲಿ ಇಂತಹ ಪ್ರಕರಣಗಳು ಬಂದರೆ ಚಿಕಿತ್ಸೆ ಫಲಕಾರಿಯಾಗುತ್ತದೆ ಎಂದಾಗ, ಸಾಮಾನ್ಯವಾಗಿ ಕೇಸು ದಾಖಲಿಸುವುದಿಲ್ಲ. ಸೀರಿಯಸ್ ಆದಾಗ ಮಾತ್ರ ದಾಖಲಿಸುತ್ತಾರೆ. ಇದೊಂದು ಪೋಲೀಸ್, ಅಸ್ಪತ್ರೆ ಮತ್ತು ವಿಕ್ಟಿಮ್ ಮಧ್ಯೆ ಅಲಿಖಿತ ನಿಯಮವಾಗಿರುತ್ತದೆ. ಅಂದರೆ "ಪಾಪ! ಹುಷಾರಾಗ್ತಾಳೆ, ಯಾಕೆ ಸುಮ್ಮನೆ ಪೋಲೀಸ್ ಕೇಸ್?" ಎನ್ನುವ ಉದ್ದೇಶವಷ್ಟೇ! ಅಂತದರಲ್ಲಿ ಅವಳು ಸೀರಿಯಸ್ ಆದ ಕೂಡಲೇ ಆ ರಂಜಿತಾಳ ಅಪ್ಪ, ಕ್ಷಣಕೊಂದು ಮಾತಾಡಿದ್ದಂತೂ ದೊಡ್ಡ ಅಪರಾಧ. ಈಗ ಸಿಬಿಐ ರಿಪೋರ್ಟ್ ಬಂದಿದೆ. ಆತನ ಮೇಲೆ, ಈ ಘಟನೆಯನ್ನು ರಾಜಕೀಯವಾಗಿಸಿದ ಪ್ರತಿಯೊಬ್ಬರ ಮೇಲೂ ಸಮಾಜದ ಸ್ವಾಸ್ಥ್ಯ ಕೆಡಿಸಿದ ಆರೋಪದ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಲ್ಲವೇ? 

ಇನ್ನೂ ಈಗಿನ ಊಬರ್ ಪ್ರಕರಣ - ನಾನು ಇತ್ತೀಚೆಗೆ ಬಹಳ ದಿವಸಗಳಿಂದ ಓಲಾ ಉಪಯೋಗಿಸುತ್ತಿದ್ದೇನೆ. ನಿಜವಾಗಿಯೂ ಆಟೋದವರ ಆಟಾಟೋಪಗಳಿಗೆ ಕಡಿವಾಣ ಇವರಿಂದಾಗುತ್ತಿದೆ. ಹತ್ತಿದ ಕೂಡಲೇ ಜಿಪಿಎಸ್ ಹಾಕುತ್ತಾರೆ. ಅವರೆಲ್ಲಿ ಹೋಗುತ್ತಿದ್ದಾರೆ ಎಂಬುದನ್ನು ನಾವು ಟ್ರಾಕ್ ಮಾಡಬಹುದು. ಅವರ ಪ್ರತಿಯೊಂದು ಡಿಟೇಲ್ಸ್ ನಮ್ಮ ಮೊಬೈಲಿಗೆ ಮತ್ತು ನಮ್ಮ ಮೇಲ್ ಬಾಕ್ಸ್ಗೆ ಬಂದು ಬೀಳುತ್ತದೆ. ಅದನ್ನು ಉಪಯೋಗಿಸಿಕೊಳ್ಳುವುದು ಹೇಗೆ? ಎಂಬುದು ನನ್ನ ಆಯ್ಕೆಯಷ್ಟೆ. ಇವರು ಆಟೋದವರ ಹಾಗೇ ಎಲ್ಲೆಂದರಲ್ಲಿ ಸುತ್ತುವುದಿಲ್ಲ. ಈಗ ಬ್ಯಾನ್ ಅಥವಾ ಮತ್ತೇನೋ ರೂಲ್ಸ್ ಬಂದು, ಲೈಸೆನ್ಸ್ ಮುಂತಾದ ದರಗಳನ್ನು ಹೆಚ್ಚಿಸಿ, ಅದನ್ನು ಮತ್ತೆ ಕನ್ಸುಮರ್ ಕೊಡಬೇಕಾಗುತ್ತದೆ. ಒಬ್ಬಳಿಗಾದ ತೊಂದರೆಗೆ ಇಡೀ ಸಿಸ್ಟಮ್ ಅನ್ನೇ ಬ್ಯಾನ್ ಮಾಡುವುದು! ಸರಿಯೇ? ಇಡೀ ಈ ಪ್ರಕರಣದಲ್ಲಿ ಆಕೆಯ ಪಾತ್ರವಿಲ್ಲವೇ? ಆಕೆಗೆ ಆಪ್ ಉಪಯೋಗಿಸಿ ಕ್ಯಾಬ್ ಬುಕ್ ಮಾಡಲಾಗುತ್ತದೆ, ಆದರೆ ಜಿಪಿಎಸ್ ನೋಡಲಾಗುತ್ತಿರಲಿಲ್ಲವೇ? ಏಕೆ ಜಿಪಿಎಸ್ ಇಲ್ಲಾ ಎಂದು ಕೇಳಬಹುದಿತ್ತಲ್ಲವೇ? ಆ ಕೂಡಲೇ ಊಬರ್ ಗೆ ಫೋನ್ ಮಾಡಿ ನನಗೆ ಈ ಗಾಡಿ ಬೇಡ ಎಂದು ಹೇಳಿ ಮತ್ತೊಂದರಲ್ಲಿ ಹೋಗಬಹುದಿತ್ತಲ್ಲವೇ? ಫ್ರೆಂಡ್ ಗೆ ಮೆಸೇಜ್ ಕಳಿಸುವ ಬದಲು, ಮತ್ತೊಮ್ಮೆ ಆತನಿಗೆ ಮೆಸೇಜ್ ಕಳಿಸಿದಳಂತೆ! ಅದು ಹೇಗೆ? ಆ ಸಹೋದರಿಯರ ಪ್ರಕರಣದಂತೆ ಇದು ಕೂಡ ಉಲ್ಟಾ ಹೊಡೆಯಬಾರದು ಎಂದೆಣಿಸಿದ ಮರುಕ್ಷಣವೇ ಥೂ! ಆಕೆಯ ಮೇಲೆ ದೌರ್ಜನ್ಯವಾಗಿರಬೇಕೆಂದು ಬಯಸುತ್ತೀಯಾ? ಅನಿಸಿಬಿಡುತ್ತದೆ. ಪ್ರತಿಯೊಬ್ಬರೂ ಒಂಟಿಯಾಗಿದ್ದಾಗ ಇಂತಹ ಸಂದರ್ಭಗಳನ್ನೆದುರಿಸಲೇಬೇಕು. ಮನೆಯಲ್ಲಿಯೇ ನಾವೀಗ ಸೇಫ್ ಅಲ್ಲಾ. ಹಾಗಿದ್ದಾಗ ಇನ್ನೆಲ್ಲಿ ಸುರಕ್ಷಿತವಾಗಿರುತ್ತೇವೆ ನಾವು? ನಮ್ಮ ಜಾಗರೂಕತೆಯಲ್ಲಿ ನಾವಿರಬೇಕು. ಗಾಡಿ ಹತ್ತಿದ ಕೂಡಲೆ ಆಕೆ ಕೂಡ ಒಂದಷ್ಟು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕೆತ್ತಿಲ್ಲವೇ? ಇಡೀ ಪ್ರಕರಣದಲ್ಲಿ ತಾನು ಭಯಂಕರ ಇನೊಸೆಂಟ್ ಎಂಬ ನಾಟಕವೇಕೆ? (ಮಾಧ್ಯಮಗಳು ಪ್ರಕಟಿಸಿದ ಆಧಾರದ ಮೇಲೆ)

ತಲೆಕೆಟ್ಟ ನಾಲ್ಕು ಜನರು ನೈತಿಕ ಪೋಲಿಸ್ ಗಿರಿ ಮಾಡುತ್ತಾರೆ. ಅದಕೊಂದಿಷ್ಟು ಮತ್ತದೇ ತಲೆ ಕೆಟ್ಟ ಜನ ಕಿಸ್ ಟು ಲವ್ ಅಂತ ವಿರೋಧಿಸುತ್ತಾರೆ. ಬಲಿಪಶುಗಳಾಗುತ್ತಿರುವುದು ಮಾತ್ರ ನಮ್ಮಂಥವರು.

ಮಾಧ್ಯಮದವರು ಯಾವುದನ್ನು ಹೇಗೆ ಪ್ರಕಟಿಸಬೇಕೆಂಬ ಸೂಕ್ಷತೆ ಕಳೆದುಕೊಂಡುಬಿಟ್ಟಿದ್ದಾರೆ. ನಾವು ಅವುಗಳಿಗೆ ಹೇಗೆ ರಿಯಾಕ್ಟ್ ಮಾಡಬೇಕೆಂಬುದನ್ನು? ಎಲ್ಲಾ ಸೂಕ್ಷ್ಮ ವಿಷಯಗಳು ಕೇವಲ ಟಿಆರ್ ಪಿ ಗಿಟ್ಟಿಸುವ ಸಲುವಾಗಿ ನಡೆಯುತ್ತಿರುವುದು, ನಾವೆಲ್ಲರೂ, ನಮ್ಮ ಮಕ್ಕಳೆಲ್ಲರೂ ಅತ್ಯಾಚಾರಿಗಳಾಗುವ ದಾರಿಯಲ್ಲಿದ್ದೇವೆ ಅನಿಸುವುದಿಲ್ಲವೇ?

ಸಾಮಾಜಿಕ ಜಾಲತಾಣಗಳಲ್ಲೂ ಮಾಧ್ಯಮದವರ ಕೈವಾಡ

ಸಮಾಜದ ಲೋಪ ದೋಷಗಳನ್ನು ಮುಲಾಜಿಲ್ಲದೆ ಎತ್ತಿ ತೋರಿಸುವುದಕ್ಕಾಗಿಯೇ ಮಾಧ್ಯಮಗಳು ಇರುವುದು. ಹಾಗಾಗಿಯೇ ಜನಸಾಮಾನ್ಯರು ಪತ್ರಕರ್ತರಿಗೆ ಅಷ್ಟೊಂದು ಮರ್ಯಾದೆ ಕೊಡುವುದು. ಯಾವಾಗ ಮಾಧ್ಯಮಗಳು / ಪತ್ರಕರ್ತರು ತಮ್ಮ ಈ ಸಿದ್ಧಾಂತಗಳಲ್ಲಿ ರಾಜಿಯಾಗತೊಡಗಿದರೋ, ಅವರ ಮೇಲೆ ಜನರಿಗೆ ಬೇಸರ ಶುರುವಾಯಿತು. ಅಂತಹ ಜನರಿಗೆ ಈ ಸಾಮಾಜಿಕ ಜಾಲತಾಣಗಳು ವರವಾಗಿ ಕಂಡುಬಂದವು. ಒಂದೊಂದೇ ಮುಖವಾಡಗಳು ಕಳಚಿಬೀಳತೊಡಗಿದವು. ಹಿಡನ್ ಅಜೆಂಡಾ ಇರುವಂತಹ ಮಾಧ್ಯಮಗಳಿಗೆ ಮರ್ಯಾದೆ ಕಡಿಮೆಯಾಗತೊಡಗಿತು. ಇನ್ನೇನು ಎಲ್ಲವೂ ಸರಿಯಾಗಿ, ಸ್ವಸ್ಥ ಸಮಾಜ ನಿರ್ಮಾಣವಾಗಿಯೇ ಬಿಡುವುದೆಂಬ ಹುಮ್ಮಸ್ಸು ಕೂಡ ಮೂಡಿತು. ಆದರೆ ಅದಕ್ಕೆ ಅವಕಾಶ ಮಾಡಿಕೊಟ್ಟರೆ, ತಮ್ಮ ಬೇಳೆ ಬೇಯಿಸಿಕೊಳ್ಳುವುದು ಹೇಗೆ? ಇಷ್ಟು ದಿವಸಗಳು ಸಮಾಜದ ಲೋಪದೋಷಗಳಿಂದಾಗಿಯೇ ಬದುಕಿರುವ ಮಂದಿ, ಬದುಕುವುದು ಹೇಗೆ? ಹಾಗಾಗಿ ಇವರೆಲ್ಲರೂ ಈ ಸಾಮಾಜಿಕ ತಾಣಗಳನ್ನು ಕೂಡ ತಮ್ಮ ಹೋಲ್ಡ ನಲ್ಲಿಡಲು ಪ್ರಯತ್ನ ಪಡುತ್ತಿದ್ದಾರೆ. ಚರ್ಚೆಯ ಹಾದಿ ತಪ್ಪಿಸಿ, ಅಸಭ್ಯ ಶಬ್ಧಗಳಿಂದ ವಿರುದ್ಧ ಮಾತಾಡುವವರನ್ನು ನಿಂದಿಸಿ, ಇನ್ ಬಾಕ್ಸಿಗೆ ಅಶ್ಲೀಲವಾದ ಮೆಸೇಜಸ್ ಕಳಿಸಿ, ವಾತಾವರಣವನ್ನೇ ಹಾಳು ಮಾಡುತ್ತಿದ್ದಾರೆ. ಇವರ ಬೆದರಿಕೆಗೋ, ಇವರಾಡುವ ಆಟಗಳಿಗೆ ಅಸಹ್ಯ ಪಟ್ಟೋ, ಸುದ್ಧಿಯೇ ಬೇಡ ಎನ್ನುವ, ನಮ್ಮ ಪಾಡಿಗೆ ನಾವು ದೂರವಿರೋಣ ಎನ್ನುವವರೇ ಹೆಚ್ಚಾಗಿದ್ದಾರೆ. ಹಾಗಾಗಿಯೇ ವಾಟ್ಸ್ ಆಪ್ ನಂತವುಗಳು ಚುರುಕಾಗಿವೆ. ಫೇಸ್ ಬುಕ್ ನಂತವು ಮಂಕಾಗುತ್ತಿವೆ. ದುರ್ಬಲರು ಇನ್ನಷ್ಟು ದುರ್ಬಲರಾಗುತ್ತಿದ್ದಾರೆ. ಇಂತಹ ಮಂದಿ ಇನ್ನಷ್ಟು ಕೊಬ್ಬುತ್ತಿದ್ದಾರೆ. ಇವರಿಗೆ ಕಡಿವಾಣ ಹಾಕುವುದು ಹೇಗೆ?

ಅಷ್ಟೇ ಅಲ್ಲಾ. ಸಾಮಾಜಿಕ ತಾಣಗಳಲ್ಲಿ ಏಕಾಂಗಿಯಾಗಿ ಹೋರಾಡುತ್ತಿದ್ದವರು ಯಾವುದಾದರೂ ಗುಂಪಿಗೆ ಸೇರಲೇಬೇಕಾದ ಅನಿವಾರ್ಯತೆ ಸೃಷ್ಠಿಯಾಗುತ್ತಿದೆ. ಇಲ್ಲವಾದರೆ ಹಣಿಯಲೆಂದೇ ಗುಂಪು ಮಾಡಿಕೊಂಡು ಬಂದವರನ್ನುನೆದುರಿಸುವುದು ಹೇಗೆ? ಇದು ದೊಡ್ಡ ಸಮಸ್ಯೆ.

No comments:

Post a Comment