Monday, August 27, 2012

ಪರ್ವದಿಂದ ಆಯ್ದ ಮಾತುಗಳು

ಯಾವುದೋ ಕಾಲದ ವ್ಯಕ್ತಿ ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡುವ ಕಲಾಕೌಶಲವನ್ನು ಈ ಕಾದಂಬರಿ ತೋರಿಸುತ್ತದೆ. ನಾನು ಬರೆಯುತ್ತಿರುವುದು ಭಾರತ ಪಾತ್ರಗಳ ಕಥೆಯನ್ನಲ್ಲ. ಮಾನವ ಅನುಭವದ ವಿವಿಧ ಮುಖ, ರೂಪ, ಮಾನವಸಂಬಂಧ ಸ್ವರೂಪ, ಮತ್ತು ವಿವೇಚನೆಗಳನ್ನು ಎಂಬ ಪ್ರಜ್ಞೆ ನನಗೆ ಉದ್ದಕ್ಕೂ ಇತ್ತು. ಒಂದೊಂದು ಹೊಸ ಪಾತ್ರ ಅಥವಾ ಸನ್ನಿವೇಶವನ್ನು ಬರೆಯುವಾಗಲೂ ಇವುಗ ಹೊಸ ಹೊಸ ಆಯಾಮವನ್ನು ಗೋಚರಿಸುತ್ತಿದ್ದವು. ಸಿದ್ಧತೆಯ ಹಲವು ಮಜಲುಗಳಲ್ಲಿ ನನ್ನ ಕಲ್ಪನೆಗೆ ಗೋಚರಿಸಿದ್ದುದ್ದಕ್ಕಿಂತ ಅಭಿವ್ಯಕ್ತ ಕಾದಂಬರಿಯಾಗಿ ಇದು ತಾಳಿರುವ ಸ್ವರೂಪ ಮತ್ತು ಒಟ್ಟಂದದ ಅರ್ಥಗಳು ಸಂಪೂರ್ಣ ಬೇರೆಯಾಗಿವೆ. ಪರ್ವ ಬರೆದ ಅನುಭವವು ನನ್ನಲ್ಲಿ ಹೊಸ ಭಾವ ತಂದಿತ್ತು. ನನಗೆ ಹೊಸ ಹುಟ್ಟು ಕೊಟ್ಟಿತ್ತು. ರೂಢಿಯೇ ನಮ್ಮ ಬಹುತೇಕ ನಂಬಿಕೆಗಳ ಮೂಲ. ಇವನ್ನೆಲ್ಲ ಬಿಟ್ಟು ಜೀವನದ ಕೊನೆಯ ಸಾವಿನ ದೃಷ್ಟಿಯಿಂದ ಜೀವನವನ್ನು ನೋಡಿದರೆ ಹೊಸ ಅರಿವು ಹುಟ್ಟಬಹುದು ಎಂಬ ಭಾವ ಬೆಳೆದಿತ್ತು.

ಮದುವೆಗೆ ಮೊದಲು ಹುಡುಗಿಗೆ ಮಗುವಾಗುವುದೂ ತಪ್ಪಂತೆ, ನಿಯೋಗವೂ ಸರಿಯಲ್ಲವಂತೆ. ಹಿರಿಯ ಪದ್ದತಿಯೇ ತಪ್ಪೇ, ಹೆಂಗಸಿನ ಒಂದೊಂದು ಋತುಚಕ್ರ ಕಾಲದಲ್ಲಿಯೂ ಬೀಜ ಬಿತ್ತದೆ ಹಾಳು ಬಿಟ್ಟರೆ ಭೂಮಿಯನ್ನು ಬರಡು ಮಾಡಿದಷ್ಟು ಪಾಪ, ಗಂಡ ಊರಿನಲ್ಲಿ ಇಲ್ಲದಿದ್ದರೆ ಗುರು ಪತ್ನಿಯರು ಶಿಷ್ಯನನ್ನೇ ಕರೆದ ಗುರುಪತ್ನಿಯರ ಕಥೆಯಿದೆ! ಕಾನೀನ ಪುತ್ರ ಒಪ್ಪಿಗೆ, ಹೆಮ್ಮೆ ಕೂಡ (ಶಲ್ಯರಾಜ, ಮಾದ್ರಿಯ ಅಣ್ಣ)

ಕುರುಕುಲ ಬೆಳೆಯಬೇಡವೇ? ಈ ವಂಶಕ್ಕೆ ಸೊಸೆಯಾಗಿ ಬಂದ ನೀನು ಹೀಗನ್ನಬಹುದೇ? (ಪಾಂಡು)

ಸೊಸೆಯ ಮಕ್ಕಳು ಮಗನ ಮಕ್ಕಳೇಕೆ ಆಗುವುದಿಲ್ಲ? ಯುದ್ಧದಲ್ಲಿ ಗೆಲ್ಲಲಾರದು, ಕುಂತಿ ಸೋಲುವುದಿಲ್ಲ. ವಧುದಕ್ಷಿಣೆ ಪಡೆದು ಮದುವೆಯಾದ ಹೆಣ್ಣು ಗಾಂಧಾರಿ. ದೇವಜನರಲ್ಲಿ ಯಾವ ಹೆಂಗಸು ತನ್ನ ಗಣದ ಯಾವ ಗಂಡಸನ್ನಾದರೂ ಕೂಡಬಹುದು. ಗಂಡಸೇ ಆಗಲಿ, ಹೆಂಗಸೇ ಆಗಲಿ ಯಾರು ಯಾರನ್ನು ಕರೆದರೂ ನಿರಾಕರಿಸುವಂತಿಲ್ಲ. ಗಂಡಸು ಹೆಂಗಸು ಇಬ್ಬರಿಗೂ ಸಮಾನ ಅಧಿಕಾರ. ಹುಟ್ಟುವ ಮಕ್ಕಳು ಇಡೀ ಗಣಕ್ಕೆ ಸೇರಿದವು. ಎಲ್ಲರಿಗೆ ಎಲ್ಲರೂ ಗಂಡಂದಿರು, ಹೆಂಡತಿಯರು. ಸಂಕೋಚವಿಲ್ಲ, ನಾಚಿಕೆಯಿಲ್ಲ. ಭೇದ ಮಾಡಿದರೆ ಗಣಮುಖ್ಯನು ಶಿಕ್ಷಿಸುತ್ತಾನೆ. 

ಪತಿಯು ಅಶಕ್ತನಾದರೆ, ಅಥವಾ ಮಕ್ಕಳಿಲ್ಲದೆ ಸತ್ತರೆ ಅವನ ವಂಶಾಭಿವೃದ್ಧಿಗಾಗಿ ಅವನ ಹೆಂಡತಿಗೆ ನಿಯೋಗ ಮಾಡಿಸುವುದು. ಪಾಂಡು ರಾಜ ನನ್ನಿಂದ ಪ್ರಮಾಣ ಮಾಡಿಸಿಕೊಂಡ. ಈ ಪುರುಷನೊಡನೆ ನಾನು ಮೋಹಗೊಳ್ಳುವುದಿಲ್ಲ. ಅವನು ಸಮೀಪಸ್ಥನಾಗಿರುವಾಗ ನನ್ನ ಮನಸ್ಸೆಲ್ಲಾ ಪತಿಯಲ್ಲಿ ಲೀನವಾಗಿರುತ್ತದೆ. ಸಂತಾನಾಪೇಕ್ಷೆಯ ವಿನಾ ನನ್ನಲ್ಲಿ ಬೇರೆ ಬಯಕೆ ಇರುವುದಿಲ್ಲ. ಗರ್ಭ ಕಟ್ಟಿದುದು ಖಚಿತವಾದ ತಕ್ಷಣ ನಾನು ಈತನನ್ನು ಪಿತೃಸಮಾನನೆಂದು ಭಾವಿಸಿ ದೂರವಾಗುತ್ತೇನೆ. (ಕುಂತಿ)

ಯಮ ಹೇಳಿದ್ದು ‘ರಾತ್ರಿಗೆ ತನಗೆ ಯಾವ ಗಂಡ ಬರುತ್ತಾನೋ, ಯಾವ ಹೆಂಡತಿ ಬರುತ್ತಾಳೋ ನಮ್ಮಲ್ಲಿ ಯಾರಿಗೂ ಗೊತ್ತಿರುವುದಿಲ್ಲ. ನಮ್ಮ ಹೆಂಗಸರು ಸುಖಕ್ಕೆ ತಗಾದೆ ಮಾಡುತ್ತಾರೆ. ನಿನ್ನ ಹಾಗೆ ಸೇವೆ ಮಾಡುವಿದಿಲ್ಲ. ಪಾಂಡು ಧರ್ಮಾಧಿಕಾರಿಗೆ ಭಾರಿ ಔತಣವೇರ್ಪಡಿಸಿ ಕೃತಜ್ಞತೆ ಸಲ್ಲಿಸಿದ. 

ಊಟವಾಗುವ ವೇಳೆಗೆ ಸಂಜೆಯಾಗಿತ್ತು. ಅವನನ್ನು ಪಕ್ಕದ ಗುಡಿಸಿಲಿನಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದ. ತಾನು ಮಾತ್ರ ತನ್ನ ವಂಶದ ಮೊಳಕೆಯ ಹೊಟ್ಟೆಯನ್ನು ತನ್ನ ಕೈಯಿಂದ ಸವರಿ ಸವರಿ ಹಿಗ್ಗುವುದಕ್ಕೆ. ನನ್ನ ದುಃಖ ದುಮ್ಮಾನ ತಿರಸ್ಕಾರಗಳನ್ನು ಯಾರು ಅರಿಯಬೇಕು? ಬೆಳಗೆದ್ದು ಅತಿಥಿ ಹೊರಡುವಾಗ ಗಟ್ಟಿಯಾಗಿ ಕಾಲು ಹಿಸುಕಿ ನಮಸ್ಕರಿಸಿದೆ. ಧರ್ಮಾಧಿಕಾರಿ, ನಿನ್ನ ಮಗಳಿಗೆ ಆಶೀರ್ವದಿಸು. (ಕುಂತಿ)

ಕ್ಷತ್ರಿಯನಿಗೆ ಕೀರ್ತಿ ಬರುವುದು ವೀರಪುತ್ರನಿಂದ. ನಿನ್ನಂತಹ ದೊಡ್ಡ ಹೆಂಗಸಿನ ಹೊಟ್ಟೆಯಲ್ಲಿ ಇಷ್ಟು ಸಾಮಾನ್ಯ ಕಟ್ಟಿನ ಮಗು ಹುಟ್ಟಿದರ ಕಾರಣ ವೀರ್ಯದ್ದೇ. ಸರಿಯಾದ ವೀರ್ಯವಂತನಿಂದ ಸ್ವೀಕರಿಸಿ ನೀನು ಒಬ್ಬ ಬಲಶಾಲಿ ಮಗನನ್ನು ಹೆತ್ತು ಕೊಟ್ಟರೆ ನನಗೆ ಸಮಾಧಾನ. ಹೆಂಗಸಿನ ತೋಳಿನಲ್ಲಿರುವಾಗ ಇಂತಹ ಕ್ಷೇಮಭಾವ ಇರುತ್ತದೆಂದು ಇವತ್ತಿನ ತನಕ ಗೊತ್ತೇ ಇರಲಿಲ್ಲ. ಮಗುವಿನಂತೆ ರಕ್ಷಣೆ ಬಯಸಿ ಗಂಡಸಿನ ತೋಳಿನಲ್ಲಿ ಹುದುಗಿಕೊಳ್ಳುವ ಹೆಂಗಸಿನಿಂದ ಏನು ಸಿಕ್ಕುತ್ತೆ ಹುಡಿಮಣ್ಣು? (ಮರುತ್ತ)

ಸ್ವಯಂವರದಲ್ಲಿ ನನ್ನ ಕೈಹಿಡಿಯಲೆಂದು ನೂರು ಜನ ರಾಜ, ರಾಜಕುಮಾರರು ಸೇರಿದ್ದರು. ಆಗಲೂ ನನ್ನಲ್ಲಿ ಪ್ರಾಮುಖ್ಯದ ಭಾವ ಹುಟ್ಟಿತ್ತು. ಆದರೆ ಈಗ ಅರ್ಥವಾಗುತ್ತಿತ್ತು. ಸ್ವಯಂವರಕ್ಕೆ ಬೇಕಾದವರು, ಬೇಡವಾದವರು ಎಲ್ಲರೂ ಬಂದಿರುತ್ತಾರೆ. ಎಲ್ಲ ರಾಜರೂ ಒಟ್ಟು ಸೇರುವ ಸಮಾರಂಭವಾದುದರಿಂದ ಜೂಜಾಡುವವರು, ಮದ್ಯಪಾನಕ್ಕೆ ಜೊತೆ ಬಯಸುವವರೆಲ್ಲರೂ ತುಂಬುತ್ತಾರೆ. ಇವಳ ಕೈಹಿಡಿದರೆ ತಾನು ಸಾರ್ಧಕನೆಂಬ ಅನನ್ಯ ಉತ್ಕಟತೆಯಿಂದ ಯಾರೂ ಬಂದಿರುವುದಿಲ್ಲ. ಈಗ ಅವರನ್ನೆಲ್ಲ ಮೀರಿಸಿರುವ ಈ ವೀರ್ಯವಂತನು ಪರಮಭಕ್ತಿಯಿಂದ ನನ್ನ ಹಸ್ರವನ್ನು ಯಾಚಿಸುತ್ತಿದ್ದಾನೆ. ತನ್ನ ಗಣದ ಇತರ ಸ್ತ್ರೀ ಸಂಗವನ್ನು ವರ್ಜಿಸುವುದಾಗಿ ಭಾಷೆ ಇಡಲು ಸಿದ್ಧನಾಗಿದ್ದನೆ. ಇತರ ಸ್ತ್ರೀಸಂಗ ವ್ಯಸನವು ನಮ್ಮ ಆರ್ಯಾವರ್ತದ ಯಾವ ಕ್ಷತ್ರಿಯನಿಗಿಲ್ಲ? ನಾನೇ ಧನ್ಯಳು. ಪ್ರಮಾಣ ಮಾಡಿದ ಪತ್ನೀಧರ್ಮವನ್ನು ಮುಂದುಮಾಡಿ ನನ್ನ ಇಡೀ ಸುಖದ ಬಲಿ ಬೇಡಿದ ಗಂಡ. (ಕುಂತಿ)

ಈ ಇಂದ್ರ ಚಲುವನಷ್ಟೇ ಅಲ್ಲ, ಚತುರ ಕೂಡ. ಬರೀ ಶರೀರಶಕ್ತಿಯಲ್ಲ, ಕಲಾಪ್ರಪೂರ್ಣ. ಆದರೆ ಗಾಢತೆಯಲ್ಲಿ ಮುಳುಗದೆಯೇ ರತಿಯ ಮಾಧುರಯವನ್ನು ಸೃಷ್ತಿಸಿ, ಪರಸ್ಪರರಿಗೆ ಉಣಿಸಬಹುದೆಂಬ ಅರಿವನ್ನು ನಲ್ಲಿ ಹುಟ್ಟಿಸಿದ. ಇವನು ಬರೀ ಲಂಪಟನೇನೋ ಎಂದು ನನಗೆ ಒಮ್ಮೊಮ್ಮೆ ಸಿಟ್ಟು ಬರುತ್ತಿತ್ತು. ನಾನಿನ್ನ ದಾಸ ಎಂದು ಮತ್ತೆ ಮತ್ತೆ ಗೆಲ್ಲುತ್ತಿದ್ದ. ಪರ್ವತದ ನೀರಸ ವರ್ಷಗಳಲ್ಲಿ ರಸ ತುಂಬಿದ, ನನ್ನ ಮೈ ನನಗೇ ಹೂವಿನಂತೆ ಹಗುರವೆನೆಸಿದ ದಿನಗಳು ಅವು. ತನ್ನ ಹೆಂಡತಿಯಾಗೆಂದು ಕೇಳಲಿಲ್ಲ. ಭಾವನೆಯ ಭಾರದಲ್ಲಿ ಕಟ್ಟಿ ಹಾಕಲಿಲ್ಲ. ಸಂಗಡ ಬಾ ಎಂಬ ಧರ್ಮಸಂಕಟಕ್ಕೆ ಎಳೆಯಲಿಲ್ಲ. 

ಇವಳ ಹೊಟ್ಟೆ ನನ್ನದಕ್ಕಿಂತ ಹೆಚ್ಚು ಶಕ್ತಿಯುತವಾದುದೆ? ಇನ್ನೊಮ್ಮೆ ಅವಕಾಶ ಕೊಟ್ಟು ಆಗಲೂ ಅವಳು ಅವಳಿ ಬೆಳೆಸಿಕೊಂಡರೆ ಅವಳ ಸ್ಥಾನ ನನ್ನದನ್ನು ಮೀರುತ್ತದೆ. ಇನ್ನು ಅವಳು ಕೇಳಿದರೂ ಸಮ್ಮತಿಸಕೂಡದು. ಧರ್ಮವು ಲಂಪಟತನವಗಬಾರದು. (ಕುಂತಿಯ ಮತ್ಸರ)

(ಪರ್ವದಿಂದ ಆಯ್ದ ಮಾತುಗಳು)

No comments:

Post a Comment